Posts

Showing posts from September, 2019
Image
        ಅನ್ನದೇಗುಲ ಎಂಬ ವಾಸ್ತವ ಕವಿತೆ - ಅನಿತ ಅನುಕೃತಿ          ಮನುಷ್ಯನ ಬದುಕನ್ನು ಕಾಲಕಾಲಕ್ಕೆ  ಇತಿಹಾಸವಾಗಿಸುವಲ್ಲಿ ಸಾಹಿತ್ಯದ ಹಾದಿಯು ಹಿರಿದು. ಈ ನಿಟ್ಟಿನಲ್ಲಿ ಕಾವ್ಯ ಛಂದಸ್ಸು, ಅಲಂಕಾರಗಳಿಂದ ಸಿಗಂರಿಸಿಕೊಂಡು ಮನಸ್ಸಿಗೆ ಮುದ ನೀಡುವ ಪ್ರಕಾರ ಕಾವ್ಯ...... ಆಧುನಿಕ  ಕಾವ್ಯವು ಶಾಸ್ತ್ರೀಯ ಚೌಕಟ್ಟನ್ನು ಮೀರಿಯು ಹೊಸ ಪ್ರಾಸದೊಂದಿಗೆ ಸುಂದರ ಪದಪುಂಜಗಳಲ್ಲಿ ರೂಪುಗೊಂಡು  ಸಹೃಯರ ತನುಮನಗಳಿಗೆ ತಂಪೆರೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದಿನ ಯುವಕವಿಗಳ ನವನವೀನ ಕವಿತೆಗಳು ಜೀವೋನ್ಮುಖಿ ಚಿಂತನೆಗಳೊಂದಿದೆ ರಚನೆಯಾಗುತ್ತಿರುವುದು ಕನ್ನಡ ಸಾಹಿತ್ಯದ ಬೆಳವಣಿಗೆಯ  ಯುವೋದಯದ ಕಾಲವಾಗಿ ಕಾಣಬಹುದಾಗಿದೆ. ಈ ದಿಸೆಯಲ್ಲಿ ಪ್ರಸ್ತುತ ಸಮಾಜದ ವಾಸ್ತವ ಕನ್ನಡಿಯ ಹಲವು ಕವಿತೆಗಳು ಅತ್ಯಂತ ಜವಾಬ್ದಾರಿಯುತವಾಗಿ ರಚನೆಗೊಳ್ಳುತ್ತಿವೆ. ಈ ರಚನೆಗಳು ಕಳೆದ ಶತಮಾನದ ಕಾವ್ಯಲೋಕದ ಸ್ಥಿರಮಾದರಿಗಳಾಗಿ ಜನಿಸದಿದ್ದರೂ  ವಾಸ್ತವವನ್ನು ಪ್ರತಿನಿಧಿಸುವ ಸರಳ ಶೈಲಿ ಕಾವ್ಯಶಕ್ತಿಗಳಾಗಿವೆ. ಅಂಕುರ ಅವರ 'ಅನ್ನ ದೇಗುಲ' ಕವಿತೆಯು ಎತ್ತಿಕೊಂಡವರ ಕೂಸು ಸಂಕಲನದ  ಸಾತ್ವಿಕ ಚಿಂತನೆಯಾಗಿ ಶೋಧಿಸಬಹುದು. ಈ ಕವಿತೆಯ ಒಳಪದರುಗಳನ್ನು ನಮ್ಮ ತುರ್ತುಗಳಿಗೆ ವ್ಯವಸ್ಥಿತಗೊಳಿಸಿ ನೋಡಿದರೆ ಹಲವು ಹೊಸ ಆಯಾಮಗಳು ದೊರೆಯಬಹುದು. ಅನ್ನ ದೇಗುಲದೊಳಗೆ ...
Image
ವಿಮರ್ಶೆಯ ಹೊಸಹಾದಿ ಅನಿತ ಕೆ. ವಿ ವಿಮರ್ಶೆ ಎಂಬುದು ಪ್ರಸ್ತುತ ‘ಅರ್ಥೈಸು’ವ ಪರಿಯಾಗಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಚಾಚಿಕೊಂಡ ಈ ಪರಿಕಲ್ಪನೆ ವಿಶಿಷ್ಟವಾದ ಬೆಳವಣಿಗೆ ಸಾಧಿಸುತ್ತಿರುವುದು ಸಹಜ ವಿಚಾರವೇ ಆಗಿದೆ. ಆದರೆ ಇದು ಮುಖ್ಯ ವಿಚಾರವಾಗಿ ಎಲ್ಲಿಯೂ ಸೂಚಿತವಾಗದಿರುವುದು ಇದರ ಇನ್ನೊಂದು ಮುಖವೆಂದೇ ಅರ್ಥೈಸಬಹುದು. ವಿಮರ್ಶೆ ಎಂದರೇನು? ಇದೊಂದು ಪ್ರಶ್ನೆಗೆ ಉತ್ತರ ಹುಡುಕುವ ಚಿಂತನೆ ಇಂದಿಗೂ ಮಾಡುತ್ತಲೇ ಇದ್ದೇವೆ. ಒಂದು ಸಾಹಿತ್ಯ ಕೃತಿ ತೆರೆದುಕೊಳ್ಳುವ ರೂಪಾನ್ವೇಷಣೆ ಆಗಬಹುದು. ನೀ ಹೇಳಿದ ವಿಚಾರ ಹೀಗೆಲ್ಲಾ ಇದೆ ಎಂಬ ಸಂವಹನ ಸಂಗತಿ ಆಗಬಹುದು. ಒಟ್ಟಾರೆ ಒಂದು ಅಂಶದಲ್ಲಿ ಮತ್ತೆ ಹೊಸತನ್ನು ಕಾಣುವ ಅದರ ಆಸಕ್ತಿ ಕೋಟೆಯಲ್ಲಿ ವಿಹರಿಸುವ ಸೂಕ್ಷ್ಮಗಳೆಲ್ಲವೂ ವಿಮರ್ಶೆ ಆಗಬಹುದು. ಕಾಡುಹಂದಿಯೊಂದು ತನ್ನ ಆಹಾರವನ್ನು ಮತ್ತೆ ಮತ್ತೆ ಹುಡುಕಿ ಅದೇ ಜಾಗವನ್ನು ಬೆದಕುವ ಪರಿಯೊಳಗೆ ಅದರ ಆಹಾರ ವಿಮರ್ಶೆ ಅಡಗಿದೆ. ಪಂಪನು ವ್ಯಾಸ ಭಾರತವನ್ನು ತನ್ನ ಕಣ್ಣಿನಿಂದ ನೋಡುವ ಹಾಗೂ ಇಂದಿಗೂ ಭಾರತವನ್ನು ಕಾಣುವ ನವ ಅನ್ವೇಷಣೆಯ ತಾತ್ವಿಕ ತಳಹದಿಗಳೆಲ್ಲವೂ ಈ ವಿಮರ್ಶೆಯ ಸೂಕ್ಷ್ಮ ಅರ್ಥವನ್ನು ವಿಸ್ತರಿಸುತ್ತವೆ. ಇಂದು ನಾವು ಕಂಡುಕೊಳ್ಳುತ್ತಿರುವ ಹೊಸ ಚೈತನ್ಯಗಳೆಲ್ಲಾ ವಿಮರ್ಶೆಯನ್ನು ನೋಡುವ ಬೇರೆ ಬೇರೆ ನೋಟಗಳೆನ್ನಬಹುದು.  ಈ ಲೇಖನದ ಪೂರ್ಣ ಓದುವಿಗಾಗಿ : ರಚನಾ ಅಂತರರಾಷ್ಟ್ರೀಯ ಪತ್ರಿಕೆ ISSN : 23950994